ಕರ್ನಾಟಕದಲ್ಲಿ ಡಬ್ಬಿಂಗ್ ಸಿನಿಮಾಗಳು, ಟಿವಿ ಕಾರ್ಯಕ್ರಮಗಳ ಪ್ರದರ್ಶನಕ್ಕೆ ಇನ್ನು ಯಾವ ತೊಡಕೂ ಇಲ್ಲ. ಕೆಲವು ಮಾಧ್ಯಮಗಳು ಸಿಸಿಐ (ಕಾಂಪಿಟೇಟಿವ್ ಕೌನ್ಸಿಲ್ ಆಫ್ ಇಂಡಿಯಾ) ಇತ್ತೀಚಿಗೆ ನೀಡಿದ ತೀರ್ಪನ್ನು ವರದಿ ಮಾಡುವಾಗ ‘ಡಬ್ಬಿಂಗ್ ನಿಷೇಧ ತೆರವು’ ಎಂದು ಪ್ರಸಾರಿಸಿವೆ. ಆದರೆ ಇದು ತಾಂತ್ರಿಕವಾಗಿ ತಪ್ಪಾದ ವರದಿ. ಯಾಕೆಂದರೆ ಕರ್ನಾಟಕದಲ್ಲಿ ಡಬ್ಬಿಂಗ್ ನಿಷೇಧ ಇಲ್ಲವೇ ಇಲ್ಲ. ಕನಾಟಕ ಮಾತ್ರವಲ್ಲ ಭಾರತದ ಯಾವ ಭಾಗದಲ್ಲೂ ‘ಡಬ್ಬಿಂಗ್ ನಿಷೇಧ’ವಿಲ್ಲ. ಕರ್ನಾಟಕದಲ್ಲಿ ಡಬ್ಬಿಂಗ್ ಕಾರ್ಯಕ್ರಮಗಳು, ಸಿನಿಮಾಗಳನ್ನು ಬಲವಂತವಾಗಿ ತಡೆಯಲಾಗಿತ್ತು ಅಷ್ಟೆ. ಯಾವುದೇ ನಿಷೇಧವನ್ನು ಹೇರುವ ಅಧಿಕಾರ ಸರ್ಕಾರಗಳು, ನ್ಯಾಯಾಲಯಗಳಿಗೆ ಮಾತ್ರ ಇರುತ್ತದೆ, ಯಾವುದೇ ಸಂಘ-ಸಂಸ್ಥೆಗಳಿಗೆ ಅಲ್ಲ. ಈಗ ಭಾರತೀಯ ಸ್ಪರ್ಧಾ ಆಯೋಗ ಡಬ್ಬಿಂಗ್ಗೆ ಅನಧಿಕೃತವಾಗಿ ತಡೆ ಹಾಕಿದ್ದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಮತ್ತು ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘಗಳಿಗೆ ದಂಡ ವಿಧಿಸಿ, ಇನ್ನು ಮುಂದೆ ಈ ಬಗೆಯ ತಡೆಯನ್ನು ಮಾಡದಂತೆ ಎಚ್ಚರಿಸಿದೆ.
ಡಬ್ಬಿಂಗ್ ಬಗ್ಗೆ ಮಾತನಾಡುವುದಕ್ಕೆ ಮುನ್ನ ಡಬ್ಬಿಂಗ್ ಎಂದರೆ ಏನು ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ. ಯಾವುದೇ ಭಾಷೆಯ ಸಿನಿಮಾ-ಕಾರ್ಯಕ್ರಮಗಳನ್ನು ತುಟಿಚಲನೆಗೆ ಅನುಗುಣವಾಗಿ ಇನ್ನೊಂದು ಭಾಷೆಯ ಧ್ವನಿ ಮರುಲೇಪನ ಮಾಡುವುದನ್ನು ಡಬ್ಬಿಂಗ್ ಎನ್ನುತ್ತಾರೆ. ಅದರರ್ಥ ಡಬ್ಬಿಂಗ್ ಸಿನಿಮಾ, ಕಾರ್ಯಕ್ರಮಗಳು ಬಂದರೆ ರಜನೀಕಾಂತ್ರ ತಮಿಳು ಸಿನಿಮಾ, ಶಾರೂಖ್ ಖಾನ್ರ ಹಿಂದಿ ಸಿನಿಮಾ, ಮಹೇಶ್ ಬಾಬುರವರ ತೆಲುಗು ಸಿನಿಮಾಗಳನ್ನು ನಾವು ಕನ್ನಡದಲ್ಲೇ ನೋಡಬಹುದು. ಡಿಸ್ಕವರಿ, ನ್ಯಾಟ್ ಜಿಯೋದಂಥ ಚಾನಲ್ಗಳನ್ನು ನಮ್ಮ ಮಕ್ಕಳು ಇನ್ನು ಕನ್ನಡದಲ್ಲೇ ನೋಡಬಹುದು.
ಡಬ್ಬಿಂಗ್ ಬಗ್ಗೆ ಚರ್ಚೆ ಆರಂಭವಾದಾಗೆಲ್ಲ ಸಾಕಷ್ಟು ಮಂದಿ ಡಬ್ಬಿಂಗ್ ಕುರಿತು ನಿಮ್ಮ ಅಭಿಪ್ರಾಯವೇನು ಗೌಡ್ರೇ ಎಂದು ನನ್ನನ್ನು ಕೇಳುವುದುಂಟು. ನಾನು ಬಹಳ ಹಿಂದೆಯೇ ಡಬ್ಬಿಂಗ್ ಕುರಿತಾದ ನನ್ನ ನಿಲುವುಗಳನ್ನು ಸ್ಪಷ್ಟಪಡಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಮುಖವಾಣಿ ‘ಕರವೇ ನಲ್ನುಡಿ’ಯಲ್ಲಿ ಲೇಖನವೊಂದನ್ನು ಬರೆದಿದ್ದೆ. ಆ ಲೇಖನದ ಕೊನೆಯ ಕೆಲವು ಸಾಲುಗಳು ಹೀಗಿವೆ:
“ಡಬ್ಬಿಂಗ್ ಕುರಿತ ಆರೋಗ್ಯಕರ ಚರ್ಚೆಯನ್ನು ಮಾಡುವ ಬದಲು ‘ಎದೆ ಮೇಲೆ ಕಾಲಿಡುತ್ತೇನೆ’, ‘ತಲೆಹಿಡಿಯೋ ಕೆಲಸ ಮಾಡುತ್ತಿದ್ದೀರಿ’ ‘ಮೂರನೇ ಕಣ್ಣು, ನಾಲ್ಕನೇ ಕಣ್ಣು’ ಇತ್ಯಾದಿಯಾಗಿ ಮಾತನಾಡಿ ಚರ್ಚೆಯ ಹಾದಿಯನ್ನೇ ನಿರಾಕರಿಸುವುದು ಸರಿಯಲ್ಲ. ಕನ್ನಡ ಚಿತ್ರರಂಗದ ಗಣ್ಯರು ವಿವೇಕದಿಂದ ಮಾತನಾಡಬೇಕಿದೆ, ವ್ಯವಹರಿಸಬೇಕಿದೆ, ಕನ್ನಡ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚರ್ಚಿಸಬೇಕಿದೆ. ಯಾಕೆಂದರೆ ಡಬ್ಬಿಂಗ್ ವಿಷಯ ಕೇವಲ ಕನ್ನಡ ಚಿತ್ರೋದ್ಯಮಕ್ಕೆ ಸೇರಿದ ವಿಷಯವೇನಲ್ಲ, ಈ ಬಗ್ಗೆ ಮಾತನಾಡುವ ಹಕ್ಕು ಪ್ರತಿಯೊಬ್ಬ ಕನ್ನಡಿಗನಿಗೂ ಇದೆ.”

ಈ ಲೇಖನವನ್ನು ಬರೆದಾಗಲೂ ಡಬ್ಬಿಂಗ್ ಕುರಿತು ವ್ಯಾಪಕವಾದ ಚರ್ಚೆ ಆಗಬೇಕಾದ ಅಗತ್ಯವನ್ನು ಒತ್ತಿ ಹೇಳಿದ್ದೆ. ಯಾವುದೇ ಸಮಸ್ಯೆ ಎದುರಾದರೂ ಚರ್ಚೆಯೊಂದೇ ಪರಿಹಾರದ ದಾರಿಯಾಗಬೇಕು. ಆದರೆ ದುರದೃಷ್ಟವೆಂದರೆ ಕನ್ನಡ ಸಿನಿಮಾ ರಂಗದ ಬಹುತೇಕರು ಚರ್ಚೆಗೆ ತೆರೆದುಕೊಳ್ಳಲೇ ಇಲ್ಲ. ಅಮೀರ್ ಖಾನ್ ನಿರ್ಮಿಸಿದ ಸತ್ಯಮೇವ ಜಯತೇ ಧಾರಾವಾಹಿ ಕನ್ನಡದಲ್ಲಿ ಡಬ್ ಆಗುತ್ತಿದ್ದಾಗ ಅದನ್ನು ಬಲವಂತವಾಗಿ ತಡೆಯಲಾಯಿತು. ಈ ಸಂದರ್ಭದಲ್ಲಿ ಸಾವಿರಾರು ಮಂದಿ ನೆಟಿಜನ್ಗಳು ಇದರ ವಿರುದ್ಧ ಪ್ರತಿಭಟಿಸಿದರು. ಹೀಗೆ ಪ್ರತಿಭಟಿಸಿದವರನ್ನು ಅಮೀರ್ ಖಾನ್ ಏಜೆಂಟ್ಗಳು ಎಂದು ಮೂದಲಿಸಲಾಯಿತು. ಸುದ್ದಿ ಟಿವಿ ಚಾನಲ್ಗಳು ಈ ಸಂಬಂಧ ಚರ್ಚೆಗಳನ್ನು ಏರ್ಪಡಿಸಿದಾಗ ಡಬ್ಬಿಂಗ್ ಅವಶ್ಯಕತೆಯ ಬಗ್ಗೆ ಮಾತನಾಡಿದವರನ್ನು ಹೀನಾಯವಾಗಿ, ಅಶ್ಲೀಲವಾಗಿ ನಿಂದಿಸಲಾಯಿತು, ಅಕ್ಷರಶಃ ಬೆದರಿಸಲಾಯಿತು. ಆದರೆ ನಿಜವಾಗಿಯೂ ನಡೆಯಬೇಕಿದ್ದ ಚರ್ಚೆ ನಡೆಯಲೇ ಇಲ್ಲ. ನಡೆಯಲು ಡಬ್ಬಿಂಗ್ ವಿರೋಧಿಗಳು ಬಿಡಲೂ ಇಲ್ಲ.
ಇವತ್ತು ಡಬ್ಬಿಂಗ್ ಸಿನಿಮಾಗಳು ಬರದ ಕಾರಣಕ್ಕೆ ಆಗಿರುವ ಅನಾಹುತಗಳನ್ನು ಗಮನಿಸಬೇಕಿದೆ. ಅತ್ಯುತ್ತಮ ಇಂಗ್ಲಿಷ್ ಸಿನಿಮಾಗಳನ್ನು ತಮಿಳಿನವರು, ತೆಲುಗಿನವರು ತಮ್ಮ ಭಾಷೆಯಲ್ಲೇ ನೋಡುತ್ತಾರೆ. ಆದರೆ ನಾವು ಅನಿವಾರ್ಯವಾಗಿ ಇಂಗ್ಲಿಷಿನಲ್ಲೇ ನೋಡಬೇಕು. ಇಂಗ್ಲಿಷ್ ಬರದ ಬಹುಸಂಖ್ಯಾತ ಕನ್ನಡಿಗರ ಸಹಜ ಹಕ್ಕನ್ನೇ ನಾವು ಕಿತ್ತುಕೊಂಡಿದ್ದೇವೆ. ಇನ್ನೊಂದೆಡೆ ಪರಭಾಷಾ ಚಿತ್ರಗಳು ಎಗ್ಗಿಲ್ಲದೆ ರಾಜ್ಯದಲ್ಲಿ ಬಿಡುಗಡೆಯಾಗುತ್ತಿವೆ. ಬಾಹುಬಲಿಯಂಥ ಸಿನಿಮಾಗಳು ರಾಜ್ಯದ ೩೦೦ಕ್ಕೂ ಹೆಚ್ಚು ಥಿಯೇಟರುಗಳಲ್ಲಿ ಬಿಡುಗಡೆಯಾಗುತ್ತವೆ. ಅದೇ ಸಮಯದಲ್ಲಿ ಕನ್ನಡ ಸಿನಿಮಾಗಳಿಗೆ ಮೂವತ್ತು-ನಲವತ್ತು ಥಿಯೇಟರುಗಳೂ ಸಿಕ್ಕುವುದು ಕಷ್ಟವಾಗಿದೆ. ಡಬ್ಬಿಂಗ್ ಬೇಡ ಎಂದು ರಣಘೋಷ ಮಾಡುವ ಕನ್ನಡ ಸಿನಿಮಾದ ಕೆಲವರೇ ಪರಭಾಷಾ ಚಿತ್ರಗಳ ವಿತರಣೆಯ ಹಕ್ಕು ಪಡೆದು ಕರ್ನಾಟಕದ ನೂರಾರು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುತ್ತಾರೆ. ಅಷ್ಟಕ್ಕೂ ಈ ಪರಭಾಷೆಯ ಸಿನಿಮಾಗಳನ್ನು ನೋಡುತ್ತಿರುವವರು ಯಾರು? ಕೇವಲ ಪರಭಾಷಿಗರೇ? ಖಂಡಿತಾ ಇಲ್ಲ. ಕನ್ನಡಿಗರೇ ಹೆಚ್ಚು ಹೆಚ್ಚಾಗಿ ಈ ಪರಭಾಷಾ ಸಿನಿಮಾಗಳನ್ನು ನೋಡುತ್ತಿದ್ದಾರೆ. ಡಬ್ಬಿಂಗ್ ಸಿನಿಮಾಗಳು ಬಂದರೆ ಕನ್ನಡ ಪ್ರೇಕ್ಷಕರು ಸಹಜವಾಗಿಯೇ ಕನ್ನಡ ಭಾಷೆಗೆ ಡಬ್ ಆದ ಸಿನಿಮಾಗಳನ್ನೇ ನೋಡುತ್ತಾರೆ ಎಂಬುದು ಸರಳ ತರ್ಕ.
ಡಬ್ಬಿಂಗ್ ಬೇಡ ಎಂದು ಆರ್ಭಟಿಸುತ್ತಿರುವ ಕೆಲವು ನಾಯಕಮಣಿಗಳು ಸಾಲುಸಾಲಾಗಿ ರೀಮೇಕ್ ಚಿತ್ರಗಳನ್ನು ಮಾಡಿದವರು. ಹೀಗೆ ರೀಮೇಕ್ ಮಾಡಿದಾಗ ಕನ್ನಡ ಸಂಸ್ಕೃತಿಗೆ ಧಕ್ಕೆಯಾಗಲಿಲ್ಲವೇ ಎಂಬ ಪ್ರಶ್ನೆಗೆ ಅವರು ಉತ್ತರಿಸಬೇಕಾಗುತ್ತದೆ. ಡಬ್ಬಿಂಗ್ನಿಂದ ಕನ್ನಡ ಭಾಷೆ ನಾಶವಾಗುತ್ತದೆ ಎಂದು ಕೆಲವರು ಬಾಲಿಶವಾಗಿ ಮಾತನಾಡುತ್ತಾರೆ, ಕನ್ನಡ ಭಾಷೆಯ ರಕ್ಷಣೆಗಾಗಿ ಹೋರಾಟ ನಡೆಸುತ್ತಿರುವುದಾಗಿ ಅವರು ಬಡಾಯಿ ಕೊಚ್ಚಿಕೊಳ್ಳುತ್ತಾರೆ. ಆದರೆ ರೈತರು ಸಾಲು ಸಾಲಾಗಿ ಆತ್ಮಹತ್ಯೆ ಮಾಡಿಕೊಂಡಾಗ, ಕಾವೇರಿ-ಕೃಷ್ಣಾ ನದಿ ನೀರು ಹಂಚಿಕೆಯ ವಿಷಯದಲ್ಲಿ ಕರ್ನಾಟಕಕ್ಕೆ ಮರಣಶಾಸನವಾಗುವಂತಹ ತೀರ್ಪು ಬಂದಾಗ, ರೈಲ್ವೆಯಲ್ಲಿ ಕನ್ನಡಿಗರನ್ನು ಉದ್ಯೋಗಗಳನ್ನು ಕಿತ್ತುಕೊಂಡು ಬಿಹಾರಿಗಳಿಗೆ ಕೊಟ್ಟಾಗ, ಮಹದಾಯಿಯಿಂದ ಕುಡಿಯುವ ನೀರಿನ ನಮ್ಮ ಹಕ್ಕಿಗೂ ಸಂಚಕಾರ ಬಂದಾಗ ಹೀಗೆ ಇಂಥ ನೂರಾರು ಸಂದರ್ಭಗಳಲ್ಲಿ ಇವರ್ಯಾರೂ ತುಟಿಬಿಚ್ಚಿದವರಲ್ಲ.
ಬೇರೇನೂ ಬೇಡ, ಕನ್ನಡ ಚಲನಚಿತ್ರಗಳ ರಕ್ಷಣೆಗಾಗಿ ಡಾ. ರಾಜಕುಮಾರ್ ಅವರು ಬದುಕಿದ್ದಾಗ ದೊಡ್ಡದೊಂದು ಚಳವಳಿ ನಡೆಯಿತು. ಕೊನೆಯ ಬಾರಿಗೆ ಕೆಂಪೇಗೌಡ ರಸ್ತೆಯ ಜನತಾ ಬಜಾರ್ ಎದುರು ಡಾ.ರಾಜಕುಮಾರ್ ಭಾಗವಹಿಸಿ ಮಾತನಾಡಿದ್ದರು. ಆ ಪ್ರತಿಭಟನೆಯ ನಂತರ ಅದನ್ನು ಮುಂದುವರೆಸಿಕೊಂಡು ಹೋಗುವ ಎದೆಗಾರಿಕೆ ಸಿನಿಮಾಮಂದಿಗೇ ಇರಲಿಲ್ಲ. ಕರ್ನಾಟಕ ರಕ್ಷಣಾ ವೇದಿಕೆಯೇ ಆ ಚಳವಳಿಯನ್ನು ಮುಂದುವರೆಸಬೇಕಾಯಿತು. ವಾಣಿಜ್ಯ ಮಂಡಳಿ ರೂಪಿಸಿದ ನಿಯಮವನ್ನು ಉಲ್ಲಂಘಿಸಿ ಪರಭಾಷಾ ಚಿತ್ರಗಳನ್ನು ಪ್ರದರ್ಶನ ಮಾಡುತ್ತಿದ್ದ ಚಿತ್ರಮಂದಿರಗಳ ಮೇಲೆ ನಾವು ಚಳವಳಿ ನಡೆಸಿದೆವು. ನನ್ನ ಕಾರ್ಯಕರ್ತರನೇಕರು ಪೊಲೀಸರ ಲಾಠಿ ಏಟು ತಿಂದರು. ಸಾಕಷ್ಟು ಮಂದಿ ಜೈಲು ಪಾಲಾದರು. ಹೀಗೆ ಜೈಲು ಸೇರಿದ ಕಾರ್ಯಕರ್ತರನ್ನು ಕಂಡು ಮಾತನಾಡಿಸುವಷ್ಟೂ ಸೌಜನ್ಯವನ್ನು ಈಗ ‘ಕನ್ನಡಕ್ಕಾಗಿ ಪ್ರಾಣತ್ಯಾಗ’ ಮಾಡುವ ಮಾತನಾಡುತ್ತಿರುವ ಯಾರೂ ತೋರಲಿಲ್ಲ.
ಆದರೆ ಹಿಂದೆಯೂ ನಾನು ಹೇಳಿದ್ದೇನೆ, ಈಗಲೂ ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಡಬ್ಬಿಂಗ್ ಬೇಡ ಎನ್ನುತ್ತಿರುವವರ ಪೈಕಿ ಕೆಲವರು ಮಂಡಿಸುತ್ತಿರುವ ವಾದಗಳಲ್ಲಿ ಕೆಲವು ಅಂಶಗಳಿಗೆ ನನ್ನ ಸಮ್ಮತಿಯಿದೆ. ಡಬ್ಬಿಂಗ್ ಸಿನಿಮಾಗಳು ಆರಂಭಗೊಂಡ ನಂತರ ಕನ್ನಡ ಚಿತ್ರಗಳು ತಯಾರಾಗುವ ಸಂಖ್ಯೆಯೇನಾದರೂ ಕಡಿಮೆ ಆದರೆ ಚಿತ್ರರಂಗವನ್ನೇ ನೆಚ್ಚಿಕೊಂಡಿರುವ ಕಾರ್ಮಿಕರು-ತಂತ್ರಜ್ಞರು-ಕಲಾವಿದರು ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಕಿರುತೆರೆಯಲ್ಲಿ ಹಿಂದಿ, ತೆಲುಗು, ತಮಿಳು ಧಾರಾವಾಹಿಗಳೇ ಡಬ್ ಆಗಿ ಬರತೊಡಗಿದರೆ ಕನ್ನಡ ಕಿರುತೆರೆಯನ್ನೇ ನಂಬಿಕೊಂಡಿರುವ ಜನರು ಸಮಸ್ಯೆ ಎದುರಿಸಬೇಕಾಗುತ್ತದೆ. ಇದಕ್ಕೆ ಪರ್ಯಾಯ ಮಾರ್ಗವನ್ನು ಕಂಡುಕೊಳ್ಳಬೇಕಾಗಿದೆ.
ಡಬ್ಬಿಂಗ್ ಬೇಕು ಬೇಡಗಳ ಮಧ್ಯೆ ಇರಬಹುದಾದ ಮಧ್ಯಮ ಮಾರ್ಗವೊಂದೇ ಸಮಸ್ಯೆ ಪರಿಹಾರಕ್ಕೆ ಸೂಕ್ತ ಎಂಬುದು ನನ್ನ ಭಾವನೆ. ಜಗತ್ತಿನ ಯಾವುದೇ ಭಾಷೆಯಲ್ಲಿ ಬರುವ ಜ್ಞಾನ, ಮನರಂಜನೆ ತಮಗೆ ಕನ್ನಡದಲ್ಲೇ ಬೇಕು. ಅದನ್ನು ತಡೆಯುವ ಹಕ್ಕು ಯಾರಿಗೂ ಇಲ್ಲ. ಡಬ್ಬಿಂಗ್ ನಿಷೇಧವೆಂಬುದೇ ಅಸಾಂವಿಧಾನಿಕ, ಅಪ್ರಜಾಸತ್ತಾತ್ಮಕ ಮತ್ತು ಅನೈತಿಕ ಎಂಬುದು ಡಬ್ಬಿಂಗ್ ಪರವಾದವರ ವಾದ. ಈ ವಾದದಲ್ಲಿ ಅರ್ಥವಿದೆ. ಜತೆಜತೆಗೆ ಡಬ್ಬಿಂಗ್ ಬಂದರೆ ಕನ್ನಡ ಸಿನಿಮಾ ಕ್ಷೇತ್ರ ಬಡವಾಗಬಾರದು, ಕಾರ್ಮಿಕರಿಗೆ ಕೆಲಸವಿಲ್ಲದಂತಾಗಬಾರದು. ಅದನ್ನೂ ಕೂಡ ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ.
ಡಬ್ಬಿಂಗ್ ಬರದಂತೆ ತಡೆಯಲು ಸಾಧ್ಯವೇ ಇಲ್ಲ. ಆದರೆ ಅದು ಒಂದು ಬಗೆಯ ನಿಯಂತ್ರಣದಲ್ಲಿದ್ದು ಬರಬೇಕು ಎಂಬುದು ನನ್ನ ಅಭಿಮತ. ಡಿಸ್ಕವರಿ, ನ್ಯಾಟ್ ಜಿಯೋ, ಅನಿಮಲ್ ಪ್ಲಾನೆಟ್ನಂಥ ಚಾನಲ್ಗಳು ಕನ್ನಡಕ್ಕೆ ಬರಲೇಬೇಕು. ಡಬ್ಬಿಂಗ್ ಸಿನಿಮಾಗಳಿಗೆ ಶೇ.೧೦೦ರ ತೆರಿಗೆ ವಿಧಿಸಬೇಕು. ಸಂವಿಧಾನಬದ್ಧವಾಗಿಯೇ ಒಂದಷ್ಟು ನಿಯಂತ್ರಣಗಳನ್ನು ಇಟ್ಟುಕೊಂಡು ಈ ಕಾರ್ಯಕ್ರಮಗಳು ಬರುವಂತಾಗಬೇಕು. ಈ ನಿಯಂತ್ರಣಗಳನ್ನು ವಾಣಿಜ್ಯ ಮಂಡಳಿಯಂಥ ಸಂಸ್ಥೆಗಳು ಕಾನೂನುಬಾಹಿರವಾಗಿ ಹೇರುವ ಬದಲು, ಕರ್ನಾಟಕ ಸರ್ಕಾರವೇ ಅಧಿಕೃತವಾಗಿ ಜಾರಿಗೊಳಿಸಬೇಕು.
ಕೊನೆಯದಾಗಿ ಕನ್ನಡದ ಜನತೆ ತಮಗೆ ಒಪ್ಪುವುದನ್ನು ಮಾತ್ರ ಸ್ವೀಕರಿಸುತ್ತಾರೆ. ಒಳ್ಳೆಯ ಸಿನಿಮಾಗಳನ್ನು ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದಾರೆ, ಕೆಟ್ಟ ಸಿನಿಮಾಗಳನ್ನು ನಿರ್ದಯವಾಗಿ ಸೋಲಿಸಿದ್ದಾರೆ. ಡಬ್ಬಿಂಗ್ ಆಗಲೀ, ಮೂಲ ಕನ್ನಡ ಸಿನಿಮಾ ಆಗಲಿ ಒಳ್ಳೆಯದಿದ್ದರೆ ಬೆಂಬಲಿಸುತ್ತಾರೆ, ಬೇಡವೆಂದರೆ ತಿರಸ್ಕರಿಸುತ್ತಾರೆ. ಅವರಿಗೆ ಆಯ್ಕೆಯನ್ನು ಕೊಡುವುದು ಅತ್ಯಂತ ವಿವೇಕದ ಮಾರ್ಗ.
-ಟಿ.ಎ.ನಾರಾಯಣಗೌಡ
ಡಬ್ಬಿಂಗ್ ಬಗ್ಗೆ ಮಾತನಾಡುವುದಕ್ಕೆ ಮುನ್ನ ಡಬ್ಬಿಂಗ್ ಎಂದರೆ ಏನು ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ. ಯಾವುದೇ ಭಾಷೆಯ ಸಿನಿಮಾ-ಕಾರ್ಯಕ್ರಮಗಳನ್ನು ತುಟಿಚಲನೆಗೆ ಅನುಗುಣವಾಗಿ ಇನ್ನೊಂದು ಭಾಷೆಯ ಧ್ವನಿ ಮರುಲೇಪನ ಮಾಡುವುದನ್ನು ಡಬ್ಬಿಂಗ್ ಎನ್ನುತ್ತಾರೆ. ಅದರರ್ಥ ಡಬ್ಬಿಂಗ್ ಸಿನಿಮಾ, ಕಾರ್ಯಕ್ರಮಗಳು ಬಂದರೆ ರಜನೀಕಾಂತ್ರ ತಮಿಳು ಸಿನಿಮಾ, ಶಾರೂಖ್ ಖಾನ್ರ ಹಿಂದಿ ಸಿನಿಮಾ, ಮಹೇಶ್ ಬಾಬುರವರ ತೆಲುಗು ಸಿನಿಮಾಗಳನ್ನು ನಾವು ಕನ್ನಡದಲ್ಲೇ ನೋಡಬಹುದು. ಡಿಸ್ಕವರಿ, ನ್ಯಾಟ್ ಜಿಯೋದಂಥ ಚಾನಲ್ಗಳನ್ನು ನಮ್ಮ ಮಕ್ಕಳು ಇನ್ನು ಕನ್ನಡದಲ್ಲೇ ನೋಡಬಹುದು.
ಡಬ್ಬಿಂಗ್ ಬಗ್ಗೆ ಚರ್ಚೆ ಆರಂಭವಾದಾಗೆಲ್ಲ ಸಾಕಷ್ಟು ಮಂದಿ ಡಬ್ಬಿಂಗ್ ಕುರಿತು ನಿಮ್ಮ ಅಭಿಪ್ರಾಯವೇನು ಗೌಡ್ರೇ ಎಂದು ನನ್ನನ್ನು ಕೇಳುವುದುಂಟು. ನಾನು ಬಹಳ ಹಿಂದೆಯೇ ಡಬ್ಬಿಂಗ್ ಕುರಿತಾದ ನನ್ನ ನಿಲುವುಗಳನ್ನು ಸ್ಪಷ್ಟಪಡಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಮುಖವಾಣಿ ‘ಕರವೇ ನಲ್ನುಡಿ’ಯಲ್ಲಿ ಲೇಖನವೊಂದನ್ನು ಬರೆದಿದ್ದೆ. ಆ ಲೇಖನದ ಕೊನೆಯ ಕೆಲವು ಸಾಲುಗಳು ಹೀಗಿವೆ:
“ಡಬ್ಬಿಂಗ್ ಕುರಿತ ಆರೋಗ್ಯಕರ ಚರ್ಚೆಯನ್ನು ಮಾಡುವ ಬದಲು ‘ಎದೆ ಮೇಲೆ ಕಾಲಿಡುತ್ತೇನೆ’, ‘ತಲೆಹಿಡಿಯೋ ಕೆಲಸ ಮಾಡುತ್ತಿದ್ದೀರಿ’ ‘ಮೂರನೇ ಕಣ್ಣು, ನಾಲ್ಕನೇ ಕಣ್ಣು’ ಇತ್ಯಾದಿಯಾಗಿ ಮಾತನಾಡಿ ಚರ್ಚೆಯ ಹಾದಿಯನ್ನೇ ನಿರಾಕರಿಸುವುದು ಸರಿಯಲ್ಲ. ಕನ್ನಡ ಚಿತ್ರರಂಗದ ಗಣ್ಯರು ವಿವೇಕದಿಂದ ಮಾತನಾಡಬೇಕಿದೆ, ವ್ಯವಹರಿಸಬೇಕಿದೆ, ಕನ್ನಡ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚರ್ಚಿಸಬೇಕಿದೆ. ಯಾಕೆಂದರೆ ಡಬ್ಬಿಂಗ್ ವಿಷಯ ಕೇವಲ ಕನ್ನಡ ಚಿತ್ರೋದ್ಯಮಕ್ಕೆ ಸೇರಿದ ವಿಷಯವೇನಲ್ಲ, ಈ ಬಗ್ಗೆ ಮಾತನಾಡುವ ಹಕ್ಕು ಪ್ರತಿಯೊಬ್ಬ ಕನ್ನಡಿಗನಿಗೂ ಇದೆ.”

ಈ ಲೇಖನವನ್ನು ಬರೆದಾಗಲೂ ಡಬ್ಬಿಂಗ್ ಕುರಿತು ವ್ಯಾಪಕವಾದ ಚರ್ಚೆ ಆಗಬೇಕಾದ ಅಗತ್ಯವನ್ನು ಒತ್ತಿ ಹೇಳಿದ್ದೆ. ಯಾವುದೇ ಸಮಸ್ಯೆ ಎದುರಾದರೂ ಚರ್ಚೆಯೊಂದೇ ಪರಿಹಾರದ ದಾರಿಯಾಗಬೇಕು. ಆದರೆ ದುರದೃಷ್ಟವೆಂದರೆ ಕನ್ನಡ ಸಿನಿಮಾ ರಂಗದ ಬಹುತೇಕರು ಚರ್ಚೆಗೆ ತೆರೆದುಕೊಳ್ಳಲೇ ಇಲ್ಲ. ಅಮೀರ್ ಖಾನ್ ನಿರ್ಮಿಸಿದ ಸತ್ಯಮೇವ ಜಯತೇ ಧಾರಾವಾಹಿ ಕನ್ನಡದಲ್ಲಿ ಡಬ್ ಆಗುತ್ತಿದ್ದಾಗ ಅದನ್ನು ಬಲವಂತವಾಗಿ ತಡೆಯಲಾಯಿತು. ಈ ಸಂದರ್ಭದಲ್ಲಿ ಸಾವಿರಾರು ಮಂದಿ ನೆಟಿಜನ್ಗಳು ಇದರ ವಿರುದ್ಧ ಪ್ರತಿಭಟಿಸಿದರು. ಹೀಗೆ ಪ್ರತಿಭಟಿಸಿದವರನ್ನು ಅಮೀರ್ ಖಾನ್ ಏಜೆಂಟ್ಗಳು ಎಂದು ಮೂದಲಿಸಲಾಯಿತು. ಸುದ್ದಿ ಟಿವಿ ಚಾನಲ್ಗಳು ಈ ಸಂಬಂಧ ಚರ್ಚೆಗಳನ್ನು ಏರ್ಪಡಿಸಿದಾಗ ಡಬ್ಬಿಂಗ್ ಅವಶ್ಯಕತೆಯ ಬಗ್ಗೆ ಮಾತನಾಡಿದವರನ್ನು ಹೀನಾಯವಾಗಿ, ಅಶ್ಲೀಲವಾಗಿ ನಿಂದಿಸಲಾಯಿತು, ಅಕ್ಷರಶಃ ಬೆದರಿಸಲಾಯಿತು. ಆದರೆ ನಿಜವಾಗಿಯೂ ನಡೆಯಬೇಕಿದ್ದ ಚರ್ಚೆ ನಡೆಯಲೇ ಇಲ್ಲ. ನಡೆಯಲು ಡಬ್ಬಿಂಗ್ ವಿರೋಧಿಗಳು ಬಿಡಲೂ ಇಲ್ಲ.
ಇವತ್ತು ಡಬ್ಬಿಂಗ್ ಸಿನಿಮಾಗಳು ಬರದ ಕಾರಣಕ್ಕೆ ಆಗಿರುವ ಅನಾಹುತಗಳನ್ನು ಗಮನಿಸಬೇಕಿದೆ. ಅತ್ಯುತ್ತಮ ಇಂಗ್ಲಿಷ್ ಸಿನಿಮಾಗಳನ್ನು ತಮಿಳಿನವರು, ತೆಲುಗಿನವರು ತಮ್ಮ ಭಾಷೆಯಲ್ಲೇ ನೋಡುತ್ತಾರೆ. ಆದರೆ ನಾವು ಅನಿವಾರ್ಯವಾಗಿ ಇಂಗ್ಲಿಷಿನಲ್ಲೇ ನೋಡಬೇಕು. ಇಂಗ್ಲಿಷ್ ಬರದ ಬಹುಸಂಖ್ಯಾತ ಕನ್ನಡಿಗರ ಸಹಜ ಹಕ್ಕನ್ನೇ ನಾವು ಕಿತ್ತುಕೊಂಡಿದ್ದೇವೆ. ಇನ್ನೊಂದೆಡೆ ಪರಭಾಷಾ ಚಿತ್ರಗಳು ಎಗ್ಗಿಲ್ಲದೆ ರಾಜ್ಯದಲ್ಲಿ ಬಿಡುಗಡೆಯಾಗುತ್ತಿವೆ. ಬಾಹುಬಲಿಯಂಥ ಸಿನಿಮಾಗಳು ರಾಜ್ಯದ ೩೦೦ಕ್ಕೂ ಹೆಚ್ಚು ಥಿಯೇಟರುಗಳಲ್ಲಿ ಬಿಡುಗಡೆಯಾಗುತ್ತವೆ. ಅದೇ ಸಮಯದಲ್ಲಿ ಕನ್ನಡ ಸಿನಿಮಾಗಳಿಗೆ ಮೂವತ್ತು-ನಲವತ್ತು ಥಿಯೇಟರುಗಳೂ ಸಿಕ್ಕುವುದು ಕಷ್ಟವಾಗಿದೆ. ಡಬ್ಬಿಂಗ್ ಬೇಡ ಎಂದು ರಣಘೋಷ ಮಾಡುವ ಕನ್ನಡ ಸಿನಿಮಾದ ಕೆಲವರೇ ಪರಭಾಷಾ ಚಿತ್ರಗಳ ವಿತರಣೆಯ ಹಕ್ಕು ಪಡೆದು ಕರ್ನಾಟಕದ ನೂರಾರು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುತ್ತಾರೆ. ಅಷ್ಟಕ್ಕೂ ಈ ಪರಭಾಷೆಯ ಸಿನಿಮಾಗಳನ್ನು ನೋಡುತ್ತಿರುವವರು ಯಾರು? ಕೇವಲ ಪರಭಾಷಿಗರೇ? ಖಂಡಿತಾ ಇಲ್ಲ. ಕನ್ನಡಿಗರೇ ಹೆಚ್ಚು ಹೆಚ್ಚಾಗಿ ಈ ಪರಭಾಷಾ ಸಿನಿಮಾಗಳನ್ನು ನೋಡುತ್ತಿದ್ದಾರೆ. ಡಬ್ಬಿಂಗ್ ಸಿನಿಮಾಗಳು ಬಂದರೆ ಕನ್ನಡ ಪ್ರೇಕ್ಷಕರು ಸಹಜವಾಗಿಯೇ ಕನ್ನಡ ಭಾಷೆಗೆ ಡಬ್ ಆದ ಸಿನಿಮಾಗಳನ್ನೇ ನೋಡುತ್ತಾರೆ ಎಂಬುದು ಸರಳ ತರ್ಕ.
ಡಬ್ಬಿಂಗ್ ಬೇಡ ಎಂದು ಆರ್ಭಟಿಸುತ್ತಿರುವ ಕೆಲವು ನಾಯಕಮಣಿಗಳು ಸಾಲುಸಾಲಾಗಿ ರೀಮೇಕ್ ಚಿತ್ರಗಳನ್ನು ಮಾಡಿದವರು. ಹೀಗೆ ರೀಮೇಕ್ ಮಾಡಿದಾಗ ಕನ್ನಡ ಸಂಸ್ಕೃತಿಗೆ ಧಕ್ಕೆಯಾಗಲಿಲ್ಲವೇ ಎಂಬ ಪ್ರಶ್ನೆಗೆ ಅವರು ಉತ್ತರಿಸಬೇಕಾಗುತ್ತದೆ. ಡಬ್ಬಿಂಗ್ನಿಂದ ಕನ್ನಡ ಭಾಷೆ ನಾಶವಾಗುತ್ತದೆ ಎಂದು ಕೆಲವರು ಬಾಲಿಶವಾಗಿ ಮಾತನಾಡುತ್ತಾರೆ, ಕನ್ನಡ ಭಾಷೆಯ ರಕ್ಷಣೆಗಾಗಿ ಹೋರಾಟ ನಡೆಸುತ್ತಿರುವುದಾಗಿ ಅವರು ಬಡಾಯಿ ಕೊಚ್ಚಿಕೊಳ್ಳುತ್ತಾರೆ. ಆದರೆ ರೈತರು ಸಾಲು ಸಾಲಾಗಿ ಆತ್ಮಹತ್ಯೆ ಮಾಡಿಕೊಂಡಾಗ, ಕಾವೇರಿ-ಕೃಷ್ಣಾ ನದಿ ನೀರು ಹಂಚಿಕೆಯ ವಿಷಯದಲ್ಲಿ ಕರ್ನಾಟಕಕ್ಕೆ ಮರಣಶಾಸನವಾಗುವಂತಹ ತೀರ್ಪು ಬಂದಾಗ, ರೈಲ್ವೆಯಲ್ಲಿ ಕನ್ನಡಿಗರನ್ನು ಉದ್ಯೋಗಗಳನ್ನು ಕಿತ್ತುಕೊಂಡು ಬಿಹಾರಿಗಳಿಗೆ ಕೊಟ್ಟಾಗ, ಮಹದಾಯಿಯಿಂದ ಕುಡಿಯುವ ನೀರಿನ ನಮ್ಮ ಹಕ್ಕಿಗೂ ಸಂಚಕಾರ ಬಂದಾಗ ಹೀಗೆ ಇಂಥ ನೂರಾರು ಸಂದರ್ಭಗಳಲ್ಲಿ ಇವರ್ಯಾರೂ ತುಟಿಬಿಚ್ಚಿದವರಲ್ಲ.
ಬೇರೇನೂ ಬೇಡ, ಕನ್ನಡ ಚಲನಚಿತ್ರಗಳ ರಕ್ಷಣೆಗಾಗಿ ಡಾ. ರಾಜಕುಮಾರ್ ಅವರು ಬದುಕಿದ್ದಾಗ ದೊಡ್ಡದೊಂದು ಚಳವಳಿ ನಡೆಯಿತು. ಕೊನೆಯ ಬಾರಿಗೆ ಕೆಂಪೇಗೌಡ ರಸ್ತೆಯ ಜನತಾ ಬಜಾರ್ ಎದುರು ಡಾ.ರಾಜಕುಮಾರ್ ಭಾಗವಹಿಸಿ ಮಾತನಾಡಿದ್ದರು. ಆ ಪ್ರತಿಭಟನೆಯ ನಂತರ ಅದನ್ನು ಮುಂದುವರೆಸಿಕೊಂಡು ಹೋಗುವ ಎದೆಗಾರಿಕೆ ಸಿನಿಮಾಮಂದಿಗೇ ಇರಲಿಲ್ಲ. ಕರ್ನಾಟಕ ರಕ್ಷಣಾ ವೇದಿಕೆಯೇ ಆ ಚಳವಳಿಯನ್ನು ಮುಂದುವರೆಸಬೇಕಾಯಿತು. ವಾಣಿಜ್ಯ ಮಂಡಳಿ ರೂಪಿಸಿದ ನಿಯಮವನ್ನು ಉಲ್ಲಂಘಿಸಿ ಪರಭಾಷಾ ಚಿತ್ರಗಳನ್ನು ಪ್ರದರ್ಶನ ಮಾಡುತ್ತಿದ್ದ ಚಿತ್ರಮಂದಿರಗಳ ಮೇಲೆ ನಾವು ಚಳವಳಿ ನಡೆಸಿದೆವು. ನನ್ನ ಕಾರ್ಯಕರ್ತರನೇಕರು ಪೊಲೀಸರ ಲಾಠಿ ಏಟು ತಿಂದರು. ಸಾಕಷ್ಟು ಮಂದಿ ಜೈಲು ಪಾಲಾದರು. ಹೀಗೆ ಜೈಲು ಸೇರಿದ ಕಾರ್ಯಕರ್ತರನ್ನು ಕಂಡು ಮಾತನಾಡಿಸುವಷ್ಟೂ ಸೌಜನ್ಯವನ್ನು ಈಗ ‘ಕನ್ನಡಕ್ಕಾಗಿ ಪ್ರಾಣತ್ಯಾಗ’ ಮಾಡುವ ಮಾತನಾಡುತ್ತಿರುವ ಯಾರೂ ತೋರಲಿಲ್ಲ.
ಆದರೆ ಹಿಂದೆಯೂ ನಾನು ಹೇಳಿದ್ದೇನೆ, ಈಗಲೂ ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಡಬ್ಬಿಂಗ್ ಬೇಡ ಎನ್ನುತ್ತಿರುವವರ ಪೈಕಿ ಕೆಲವರು ಮಂಡಿಸುತ್ತಿರುವ ವಾದಗಳಲ್ಲಿ ಕೆಲವು ಅಂಶಗಳಿಗೆ ನನ್ನ ಸಮ್ಮತಿಯಿದೆ. ಡಬ್ಬಿಂಗ್ ಸಿನಿಮಾಗಳು ಆರಂಭಗೊಂಡ ನಂತರ ಕನ್ನಡ ಚಿತ್ರಗಳು ತಯಾರಾಗುವ ಸಂಖ್ಯೆಯೇನಾದರೂ ಕಡಿಮೆ ಆದರೆ ಚಿತ್ರರಂಗವನ್ನೇ ನೆಚ್ಚಿಕೊಂಡಿರುವ ಕಾರ್ಮಿಕರು-ತಂತ್ರಜ್ಞರು-ಕಲಾವಿದರು ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಕಿರುತೆರೆಯಲ್ಲಿ ಹಿಂದಿ, ತೆಲುಗು, ತಮಿಳು ಧಾರಾವಾಹಿಗಳೇ ಡಬ್ ಆಗಿ ಬರತೊಡಗಿದರೆ ಕನ್ನಡ ಕಿರುತೆರೆಯನ್ನೇ ನಂಬಿಕೊಂಡಿರುವ ಜನರು ಸಮಸ್ಯೆ ಎದುರಿಸಬೇಕಾಗುತ್ತದೆ. ಇದಕ್ಕೆ ಪರ್ಯಾಯ ಮಾರ್ಗವನ್ನು ಕಂಡುಕೊಳ್ಳಬೇಕಾಗಿದೆ.
ಡಬ್ಬಿಂಗ್ ಬೇಕು ಬೇಡಗಳ ಮಧ್ಯೆ ಇರಬಹುದಾದ ಮಧ್ಯಮ ಮಾರ್ಗವೊಂದೇ ಸಮಸ್ಯೆ ಪರಿಹಾರಕ್ಕೆ ಸೂಕ್ತ ಎಂಬುದು ನನ್ನ ಭಾವನೆ. ಜಗತ್ತಿನ ಯಾವುದೇ ಭಾಷೆಯಲ್ಲಿ ಬರುವ ಜ್ಞಾನ, ಮನರಂಜನೆ ತಮಗೆ ಕನ್ನಡದಲ್ಲೇ ಬೇಕು. ಅದನ್ನು ತಡೆಯುವ ಹಕ್ಕು ಯಾರಿಗೂ ಇಲ್ಲ. ಡಬ್ಬಿಂಗ್ ನಿಷೇಧವೆಂಬುದೇ ಅಸಾಂವಿಧಾನಿಕ, ಅಪ್ರಜಾಸತ್ತಾತ್ಮಕ ಮತ್ತು ಅನೈತಿಕ ಎಂಬುದು ಡಬ್ಬಿಂಗ್ ಪರವಾದವರ ವಾದ. ಈ ವಾದದಲ್ಲಿ ಅರ್ಥವಿದೆ. ಜತೆಜತೆಗೆ ಡಬ್ಬಿಂಗ್ ಬಂದರೆ ಕನ್ನಡ ಸಿನಿಮಾ ಕ್ಷೇತ್ರ ಬಡವಾಗಬಾರದು, ಕಾರ್ಮಿಕರಿಗೆ ಕೆಲಸವಿಲ್ಲದಂತಾಗಬಾರದು. ಅದನ್ನೂ ಕೂಡ ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ.
ಡಬ್ಬಿಂಗ್ ಬರದಂತೆ ತಡೆಯಲು ಸಾಧ್ಯವೇ ಇಲ್ಲ. ಆದರೆ ಅದು ಒಂದು ಬಗೆಯ ನಿಯಂತ್ರಣದಲ್ಲಿದ್ದು ಬರಬೇಕು ಎಂಬುದು ನನ್ನ ಅಭಿಮತ. ಡಿಸ್ಕವರಿ, ನ್ಯಾಟ್ ಜಿಯೋ, ಅನಿಮಲ್ ಪ್ಲಾನೆಟ್ನಂಥ ಚಾನಲ್ಗಳು ಕನ್ನಡಕ್ಕೆ ಬರಲೇಬೇಕು. ಡಬ್ಬಿಂಗ್ ಸಿನಿಮಾಗಳಿಗೆ ಶೇ.೧೦೦ರ ತೆರಿಗೆ ವಿಧಿಸಬೇಕು. ಸಂವಿಧಾನಬದ್ಧವಾಗಿಯೇ ಒಂದಷ್ಟು ನಿಯಂತ್ರಣಗಳನ್ನು ಇಟ್ಟುಕೊಂಡು ಈ ಕಾರ್ಯಕ್ರಮಗಳು ಬರುವಂತಾಗಬೇಕು. ಈ ನಿಯಂತ್ರಣಗಳನ್ನು ವಾಣಿಜ್ಯ ಮಂಡಳಿಯಂಥ ಸಂಸ್ಥೆಗಳು ಕಾನೂನುಬಾಹಿರವಾಗಿ ಹೇರುವ ಬದಲು, ಕರ್ನಾಟಕ ಸರ್ಕಾರವೇ ಅಧಿಕೃತವಾಗಿ ಜಾರಿಗೊಳಿಸಬೇಕು.
ಕೊನೆಯದಾಗಿ ಕನ್ನಡದ ಜನತೆ ತಮಗೆ ಒಪ್ಪುವುದನ್ನು ಮಾತ್ರ ಸ್ವೀಕರಿಸುತ್ತಾರೆ. ಒಳ್ಳೆಯ ಸಿನಿಮಾಗಳನ್ನು ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದಾರೆ, ಕೆಟ್ಟ ಸಿನಿಮಾಗಳನ್ನು ನಿರ್ದಯವಾಗಿ ಸೋಲಿಸಿದ್ದಾರೆ. ಡಬ್ಬಿಂಗ್ ಆಗಲೀ, ಮೂಲ ಕನ್ನಡ ಸಿನಿಮಾ ಆಗಲಿ ಒಳ್ಳೆಯದಿದ್ದರೆ ಬೆಂಬಲಿಸುತ್ತಾರೆ, ಬೇಡವೆಂದರೆ ತಿರಸ್ಕರಿಸುತ್ತಾರೆ. ಅವರಿಗೆ ಆಯ್ಕೆಯನ್ನು ಕೊಡುವುದು ಅತ್ಯಂತ ವಿವೇಕದ ಮಾರ್ಗ.
-ಟಿ.ಎ.ನಾರಾಯಣಗೌಡ